Thursday 22 November 2012

ಕುತೂಹಲಕಾರಿ ಯುವಕ


ಅಪ್ಪ ನಂಜುಂಡೇಶ್ವರ ವೆಂಕಟೇಶ್ವರ
ಸಿದ್ದಪ್ಪಾಜಿ ಮಂಟೇಸ್ವಾಮಿ
ಅಮ್ಮ ಹಿರಿಯಮ್ಮ ಮುತ್ತಲಮ್ಮ
ಚಾಮುಂಡೇಶ್ವರಿ...ಎಲ್ಲರನ್ನೂ ಕಾಪಾಡು ತಾಯೇ...


ಹೀಗೆ ದಿನವೂ ಮಡಿವಂತನಾಗಿ ನಿಶ್ಕಲ ಮನಸ್ಸಿನ್ನಿಂದ ಎಲ್ಲರೂ ಕ್ಷೇಮವಾಗಿರಲೆಂದು ದೇವರ ಪೂಜೆ ಮುಗಿಸಿ ನಂತರ ಕೆಲಸ ಶುರು ಮಾಡುತ್ತಾನೆ ಈ ನಮ್ಮ ಶಾಂತವೀರಪ್ಪ...ಹೆಸರಿಗೆ ತಕ್ಕಂತೆ ಶಾಂತಿಯಿಂದ ಬಾಳಲು ಬಲ್ಲ,ವೀರಾವೇಶದಿಂದ ಹೋರಾಡಲು ಬಲ್ಲ,ವಯಸ್ಸು 56..ಗಂಡನೇ ದೈವ ಮಕ್ಕಳೇ ಜೀವ ಎಂದು ಜೀವನ ಸಾಗಿಸುತ್ತಿರುವ ಸದ್ಗೃಹಿಣಿ ಸರೋಜ ಇವನ ಹೆಂಡತಿ. ಹಹ ಇವರಿಗೆ ಗಟ್ಟಿಮುಟ್ಟಾದ ಚಿಗುರು ಮೀಸೆಯ ಚೆಲುವ ಚಂದ್ರಕಾಂತನೆಂಬ ಮಗನೂ ಹಾಗೂ ಮೃದು ಮನಸ್ಸಿನ ಎಲ್ಲದಕ್ಕೂ ಮುನಿಸಿಕೊಳ್ಳುವ ಮಾನಸ ಎಂಬ ಮುತ್ತಿನಂತ ಮಗಳು. ಈ ಇಬ್ಬರು ಇವರ ಮುದ್ದು ಮಕ್ಕಳು.
ಮಗ ಅಂತೂ ಅಪ್ಪನಂತೆ ವೀರನೇ ಅದರಲ್ಲಿ ಎರಡು ಮಾತಿಲ್ಲ,ಆದರೆ ಶಾಂತ ಸ್ವಭಾವ ಇವನಿಗೆ ಗೊತ್ತಿಲ್ಲ.ಎಲ್ಲ ಹುಡುಗರಂತೆ ಇವನಿಗೂ ಕ್ರಿಕೆಟ್ ಆಡುವುದು..ಊರು ಸುತ್ತುವುದು...ಹುಡ್ಗೀರ್ ಚುಡಾಯಿಸುವುದು....ಇವನ ಅಭ್ಯಾಸವಾಗಿಬಿಟ್ಟಿದೆ. ಅದರಲ್ಲೂ ಇವನಲ್ಲಿರುವ ವಿಶೇಷತೆ ಏನಪ್ಪಾ ಅಂದ್ರೆ....ಗಂಭೀರ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡುವುದು,ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳುವಂತ ಕುತೂಹಲಕಾರಿ ಯುವಕ.ಇದು ಒಂದು ರೀತಿ ಇವನ ಒಳ್ಳೆಯ ಹವ್ಯಾಸ...ಹ್ಮ್ ಹ್ಮ್ ನೋಡ್ರಪ್ಪ ಇವನೇ ನಮ್ಮ ಕಥಾನಾಯಕ ಇನ್ಮೇಲೆ ಶುರುವಾಗೋದು ಇವನ ಕಾಯಕ.....ಏನೇನ್ ಮಾಡ್ತಾನೆ ಅಂತೀರಾ.....ನೀವೇ ಓದಿ



ಚಂದ್ರಕಾಂತನಿಗೆ ಊರು ಸುತ್ತೋ ಅಭ್ಯಾಸ ಇದ್ದಮೇಲೆ ಇವನದೊಂದ್ ಗ್ಯಾಂಗ್ ಇರ್ಬೇಕಲ್ವ..ಹೌದು ಇದೆ ಸತೀಶ,ವಿಜಯ,ಶಂಕರ ಇವನ ಸ್ನೇಹಿತರು..ಇವರೇ ಈ ಗ್ಯಾಂಗ್ ಮೆಂಬರ್..........ಶುದ್ದ ಪೋಲಿಗಳು...ಆದರೆ ಕಟುಕರಲ್ಲ...ಕೆಡುಕರು ಅಲ್ಲ.....ಅವರ ವಯಸ್ಸಿಗೆ ತಕ್ಕ ಮನಸ್ಸುಳ್ಳ ಪೋರರು........... ಕಾಲೇಜ್ನಲ್ಲೂ ತರ್ಲೆ ಆಟ....ಹೊರಗಡೇನೂ ಅದೇ ಆಟ...ಈಗೆ ದಿನವೂ ಬೇರೆಯವರನ್ನು ಕೀಟಲೇ ಮಾಡುತ್ತಲೇ ಕಾಲ ಕಳೆಯುತ್ತಿರುತ್ತಾರೆ.....ಹೀಗೆ ಇವರ ಅಡ್ಡದ
್ದಲ್ಲಿ ಕೂತು ಹೋಗೋ ಬಾರೋರ್ನೆಲ್ಲಾ ಚುಡಾಯಿಸ್ತಾ ಕುಳಿತಿರಬೇಕಾದ್ರೆ.....
ಸರ್ರನೆ ಬಂದ ಒಂದು ಆಟೋದಿಂದ ಮೆಲ್ಲನೆ ಇಳಿಯುತ್ತಾಳೆ . ರಂಭೆ ಅಲ್ಲ...ಮೇನಕೆ, ತಿಲೋತ್ತಮೆ ಅಲ್ಲವೇ ಅಲ್ಲ. ಅದಕ್ಕಿಂತ ಸುಂದರವಾದ ಪೋರಿ, ಪೋಲಿ ಹುಡುಗರ ಮನ ಕೆಣಕಲೆಂದೆ ಬಂದ ನಾರಿ...ಅವಳ ಹೆಸರೇ ಮಾದುರಿ....ಅವಳ ನೋಡನೋಡುತ್ತಲೇ ಈ ಮೂವರು ಸುಸ್ತು...ಇನ್ನೂ ಚಂದ್ರಅಂತೂ ಸುಸ್ತೋ ಸುಸ್ತು...ಅವಳ ನೋಟಕ್ಕೆ ಇವನು ಬಂದಿತನಾಗೋದಾ ,ಅವಳ ಹಂಸದ ನಡಿಗೆಗೆ ಇವನು ದ್ವ0ಸವಾದ......ಹೊಸ ಹೊಸ ಬಯಕೆಗಳು ಹುಟ್ಟಿತು ಇವನ್ನಲ್ಲಿ....
ನೋಡಪ್ಪ.....ಆಗ್ಲೇ ಹಾಡಿನ ಜೊತೆ ಕನಸಿನ ಲೋಕಕ್ಕೆ ಹೋಗ್ ಬಿಡುತ್ತಾನೆ ನಮ್ ಹುಡ್ಗ.

ಗಾಳಿಯೂ ಬೀಸಿರೆ ಮನದಲಿ
ಮೌನಾದಿ ರಾಗವು ಮೂಡುತಲಿ
ಪ್ರೇಮದ ಪಾಠದಿ ಮಂತ್ರವ ಕಲಿತಿಹ
ಒಂಟಿ ಪೂಜಾರಿಯೂ ನಾನಿಲ್ಲಿ

ಪುರ್ರನೆ ಹಕ್ಕಿಯು ಹಾರಿತು ಕಾಣದೆ
ನನ್ನಯ ಹೃದಯದ ಬಡಿತವು ಹೆಚ್ಚಿದೆ
ಚಂದ್ರನೆ ನಿನ್ನಯ ತಿಂಗಳ ಬೆಳಕಲಿ
ಹುಣ್ಣಿಮೆ ರಾತ್ರಿಯ ತಣ್ಣನೆ ಗಾಳಿಲಿ

ನನ್ನಯ ಗೆಳತಿಯ ಕಂಗಳ ನೋಟದಿ
ಪೆನ್ನನೆ ನಂಬಿಹ ಖಾಲಿಯ ಹಾಳೆಲಿ
ತುಂಬಿದೆ ನನ್ನಯ ಪ್ರೀತಿಯ ಸಿಂಚನ
ಕಾಣದ ಅವಳಿಗೂ ಎಂತದೋ ಕಂಪನ

ಅವಳ ಹಂಸದ ನಡಿಗೆಗೆ ನಾ ದ್ವ0ಸವಾದೆ
ಪ್ರೇಮದ ಮಾಟಕೆ ನಾ ಬಂದಿತನಾದೆ
ಗಾಳಿಯೂ ಬೀಸಿದ ರಭಸವು ನನ್ನೇಕೆ
ತೂರಿದೆ ಪ್ರೇಮದ ಮಾಯಾ ಲೋಕಕೆ.|

ಹ್ಮ್ ಹ್ಮ್ ಹಾಡು ಮುಗೀತು..ಇನ್ನೂ ಅವಳ ಮನಸ್ಸನ ಗೆಲ್ಲಬೇಕಲ್ಲ ಅದಕ್ಕೆ ತಯಾರಿ..ಒಂದು ದಿನ ದೈರ್ಯವಾಗಿ ಅವಳ ಹತ್ತಿರ ಹೋಗಿ..ಹಿಂದೆ ಮುಂದೆ ಬೇರೇನು ಮಾತನಾಡದೇ...ಒಂದೇ ಸರಿ I LOVE U ಅಂತ ಹೇಳೆ ಬಿಡ್ತಾನೆ.......
Dialog ಹೇಳಕ್ಕೂ ಶುರು ಮಾಡ್ತಾನೆ..... ಹೊಳೆವ ವಜ್ರಕ್ಕಿಂತ ಸೆಳೆವ ಈ ನಿಮ್ಮ ಕಣ್ಣೇ ಸೂಪರ್ ರೀ ಮುಗಿಯುವ ಕಥೆಗಿಂತ ನೀವು ಶುರು ಮಾಡೋ ಮಾತೇ ಈ interesting ರಿ. ಅದೇನೋ ಗೊತ್ತಿಲ್ಲ ರಿ...ನಿಮ್ಮ ನೋಡಿದಾಗಿನಿಂದ ನಾನಂತೂ ಹುಚ್ಚ ಆಗೋಗ್ಬಿಟ್ಟಿದ್ದೀನಿ....ಪ್ರೀತಿ ಅಂದ್ರೆ ಇದೇನಾ.. ಇದು ಶುರುವಾಗೋದು ಹೀಗೇನಾ....ಬೇಗ ಉತ್ತರ ಕೊಡೆ ನನ್ ಚಿನ್ನ Stupid ಹಬ್ಬಾಬ್ಬ....ನೋಡ್ರಪ್ಪ ಇವನು ಇಷ್ಟ್ ಗಂಟಲು ಹರ್ಕೊಂಡ್ ಇಷ್ಟೆಲ್ಲಾ ಹೇಳಿದ್ರೆ ಅವಳು ಒಂದೇ ಪದದಲ್ಲಿ ಉತ್ತರ ಕೊಟ್ಲಲ್ಲೋ........ ಮಗ ಅವಳು ಶುರು ಮಾಡೋ ಮಾತು ಸಕ್ಕತ್ interesting ಆಗಿದೆ ಮಗ.....!!! ಇಷ್ಟೆಲ್ಲಾ ಆದ್ರೂ ಬಿಡ್ತಾನ.. ದಿನ ಹೀಗೆ ಮಾಡ್ತಾನೆ ದಿನಕ್ಕೊಂದು Dialog ಅದಕ್ಕೆ ತಕ್ಕ ಉತ್ತರ ತಕೊಂಡ್ ಹೋಗ್ತಾ ಇರ್ತಾನೆ... ಹೇಗೆಗೋ ಮಾಡಿ ಕೊನೆಗೂ ಅವಳ ಮನಸ್ಸ.ಗೆದ್ಡೆ ಬಿಡ್ತಾನೆ.......


ಅಂತು ಇಂತು ಚಂದ್ರ ಮಾದುರಿ ಇಬ್ಬರು Love ನಲ್ಲಿ ಬೀಳ್ತಾರೆ....ಈಗೆ ಪ್ರೀತಿ ಮಾಡ್ತಾ ಕಾಲ ಕಳೆಯುತ ಇರ್ತಾರೆ..
ಒಂದು ದಿನ ಆಕಸ್ಮಿಕವಾಗಿ ಮಾಧುರಿ ಇರೋ Hostel ಗೆ ಅವಳ ಊರಿಂದ ಫೋನ್ ಕಾಲ್ ಬರುತ್ತೆ...ಫೋನ್ ನಲ್ಲಿ ಮಾತಾಡ್ತಾ ಮಾತಾಡ್ತಾ ಅವಳು ಮೂರ್ಛೆ
ಬೀಳ್ತಾಳೆ...ಅವಳು ಫೋನ್ ನಲ್ಲಿ ಕೇಳಿದ ವಿಷಯ ಏನು ಗೊತ್ತಾ...."ನಿಮ್ಮ ಅಪ್ಪ ಸತ್ತುಹೋಗಿದ್ದಾರೆ ಬೇಗ ಊರಿಗೆ ಬಾ ಎಂದು"
ಏನಪ್ಪಾ ಇದು ಒಂದೇ ಸರಿ ಅವರಪ್ಪನೆ ಸಾಯಿಸಿ ಬಿಟ್ಟ..ಯಾರಪ್ಪ ಈ ಮಾದುರಿ ಅಂತ ಚಿಂತಿಸ್ತಾ ಇದ್ದೀರ....ಇವಳು ಮಾಯಾಪುರ ಎಂಬ ಹಳ್ಳಿ ಇಂದ
ಕಾಲೇಜ್ನಲ್ಲಿ ಓದೋಕೆ ಅಂತ ಇಲ್ಲಿಗೆ ಬದೀರ್ತಾಳೆ..ಇಲ್ಲಿ Hostelನಲ್ಲಿ ಉಳಿದುಕೊಂಡಿರ್ತಾಳೆ...ಈ ವಿಷಯ ತಿಳಿದ ಕೂಡಲೇ..ತನ್ನ ಪ್ರೀತಿಯ ಅಪ್ಪನನ್ನು
ಕೊನೆಯ ಬಾರಿ ನೋಡಲು ದಿಡೀರನೆ ಚಂದ್ರನಿಗೂ ಹೇಳದೇ ಅವಳ ಊರಿಗೆ ಹೊರಟು ಹೋಗ್ತಾಳೆ..........ಹೋದವಳು ಬರುವುದೇ ಇಲ್ಲ..


ಆ ಮಾಯಾಪುರದಲ್ಲಿ ಕೊಲೆ ಮೇಲೆ ಕೊಲೆ ನಡೀತಾ ಇರುತ್ತೆ....ಹೇಗೆ ಏನು ಎಲ್ಲಿ ಅಂತೀರಾ.......ಮಾಯಾಪುರದ ಗ್ರಾಮದಲ್ಲಿ ಒಂದು ದಟ್ಟ ಕಾಡು ಇದೆ ಅಲ್ಲಿಗೆ ಹೋದವರು
ಯಾರು ಜೀವಂತವಾಗಿ ಬರುವುದಿಲ್ಲ....ಎಲ್ಲರಿಗೂ ಆ ಕಡೆ ಹೋಗಬೇಡಿ ಎಂದು ಬುದ್ದಿ ಹೇಳುತ್ತಿದ್ದ ಮಾಧುರಿ ತಂದೆನೆ ಸತ್ತಿದ್ದಾರೆ ಎಂದರೆ
ಆ ಕಾಡಲ್ಲಿ ಅಂತದು ಏನಿರಬಹುದು..ಇದುವರೆಗೂ ಅದು ಯಾರಿಗೂ ಗೊತ್ತಿಲ್ಲ.....ಸಾಯುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ..
ಇವರೆಲ್ಲ ದೆವ್ವ ಇರಬಹುದು ಎಂದು ಭಾವಿಸಿರುತ್ತಾರೆ.
ಇತ್ತ ಚಂದ್ರನಿಗೆ ಇವಳದೇ ಚಿಂತೆ....
ಒಂದು ದಿನ.Hostel ಹೋಗಿ ವಿಚಾರಿಸಿದ ಮೇಲೆ ಅವಳ ಊರಿಗೆ ಇವನು ಪ್ರಯಾಣ ಬೆಳೆಸೆ ಬಿಡ್ತಾನೆ....ಅಲ್ಲಿಗೆ ಹೋದ್ಮೆಲೆ
ಈ ವಿಷಯವೆಲ್ಲ ತಿಳಿಯುತ್ತದೆ...ಮೊದಲೇ ಇವನು ಕುತೂಹಲಕಾರಿ ಯುವಕ...ಆ ವಿಷಯ ಕೇಳ್ತಾ ಇದ್ದಂಗೆ ಇವನಿಗೆ ಈ ಕಾಡಿನ ಬಗ್ಗೆ ತಿಳಿದುಕೊಲ್ಲುವ ಹಂಬಲ ಜಾಸ್ತಿಯಾಗುತ್ತೆ…
ಆಗ ಅವನು ಪ್ರೀತಿ ಮಾಡಿದ ಹುಡುಗಿ..ಮನೆಯವರು ಯಾರ ಬಗ್ಗೇನೂ ಚಿಂತಿಸುವುದಿಲ್ಲ.... ಇವನ ಗೆಳೆಯರ ಜೊತೆ
ಕಾಡಿಗೆ ಹೊರಟೆ ಬಿಡ್ತಾನೆ...ಈ ನಾಲ್ವರಲ್ಲಿ ಶಂಕರ ಅಂತೂ ದೊಡ್ಡ ಪುಕ್ಲ..ಭಯ ಆದಾಗೆಲ್ಲ ವಾಪಸ್ ಹೋಗೋಣ ಬನ್ರೋ ಅಂತ ಪ್ರೇರೇಪಿಸುವುದು ಇವನ ಕೆಲಸ...ಇವರಿಗಂತೂ ಅವನ ಮಾತುಗಳು Comedy ಆಗಿ ಬಿಡುತ್ತವೆ..ಅಂತೂ ಶಂಕರ ಕಾಡಿಗೆ ಬಂದು ದೊಡ್ಡ Comedian ಆಗಿಬಿಡ್ತಾನೆ ನೋಡ್ರಪ್ಪ
ಮೂರ್ನಾಲ್ಕು ದಿನ ಹುಡುಕಾಡ್ತಾರೆ ಏನೇನು ಸಿಗಲ್ಲ . .ರಾತ್ರಿ ಮಾತ್ರ ಏನೋ ಕಿರುಚುವ ಶಬ್ದ....ಅದು ಮಾತ್ರ ಭಯಂಕರ ಇರುತ್ತೆ
ಈ ಚಂದ್ರನಿಗೆ ಈ ದ್ವನಿದೆ ಚಿಂತೆ..ಏನಿರಬಹುದು ಎಂದು ಚಿಂತಿಸುತ್ತಾ ಕುಳಿತಿರಬೇಕಾದ್ರೆ ವಿಜಯ ಕಿರುಚಿದ ಶಬ್ದ ಕೇಳಿಸುತ್ತದೆ..ಅಲ್ಲಿಗೆ ಹೋಗಿ ನೋಡಿದಾಗ
ಅವನನ್ನ ವಿಕಾರವಾಗಿ ಕೊಲೆ ಮಾಡಿರುವ ದೃಶ್ಯ...ನೋಡ ನೋಡುತ್ತಲೇ ಎಲ್ಲರೂ ಭಯಪಡಿಸುತ್ತೆ ಆ ದೃಶ್ಯ.....
ಈ ಇಬ್ಬರು ಬಾರೋ ವಾಪಸ್ ಹೋಗೋಣ ಇಲ್ಲಿಗೆ ಬಂದು ವಿಜಯನ್ನೇ ಕಳ್ಕೊಂಡ್ವಲ್ಲೋ ನಮಗ್ಯಾಕೋ ಬೇಕು ಬಾರೋಅಂತ ಬಿಕ್ಕಿ ಬಿಕ್ಕಿ ಅತ್ತರು ಚಂದ್ರ ಮಾತ್ರ
ದ್ರುತಿಗೆಡಲ್ಲ... ಹೇಗೋ ಇವರನ ಸಮಾದಾನ ಮಾಡಿ ಒಪ್ಪಿಸ್ತಾನೆ...ಇನ್ನೂ ಹೆಚ್ಚಿನ ಉತ್ಸಾಹದಿಂದ ಬಂದ ಕೆಲಸದ ಕಡೆನ ಗಮನ ಕೊಡ್ತಾರೆ....
ಹಾಗೆ ಹುಡುಕಾಡ್ತಾ ಇರ್ಬೇಕಾದ್ರೆ .....ಒಂದು ಮರದ ಮೇಲಿಂದ ದೈತ್ಯಾಕಾರದ ದೇಹವಿರುವ ನೋಡುಗರನ್ನು ಭಯ ಪಡಿಸುವ ಒಂದು ಅಪರೂಪದ ಪ್ರಾಣಿ ಇವರ ಮುಂದೆ ಹಾರಿ ಬರುತ್ತೆ ...
ಹಬ್ಬಬಾ ಹೇಗಿದೆ ಗೊತ್ತಾ ಅದು ಶಂಕ್ರನೆ ಕೇಳ್ರಾಪ್ಪ ಅದನ್ನ ನೋಡ್ತಾ ನೋಡ್ತಾ ಪ್ಯಾಂಟ್ ಒದ್ದೆಯಾಗಿದ್ದು ಇವನಿಗೆ ಮೊದಲು.
ಹ್ಮ್ ಹ್ಮ್ ಅದ್ನ ನೋಡ್ತಾ ಇವ್ರೆಲ್ಲಾ ತಟಸ್ಥವಾಗಿ ನಿಂತಿರ್‌ಬೇಕಾದ್ರೇನೆ . ಸತೀಶನ ಎತ್ತಿಕೊಂಡ್ ಹೋಗೇ ಬಿಡುತ್ತೆ .... ತಿರುಗಿ ನೋಡುವಷ್ಟರಲ್ಲಿ ಮಾಯಾ....ಕ್ಷಣ ಕಾಲದಲ್ಲೇ ಸತೀಶನೂ ಕೂಡ ಕೊಲೆಯಾಗಿ ಹೋಗಿರ್ತಾನೆ......ಈಗಂತೂ ಅವರ ರೋಧನೆ ಹೇಳತೀರದು.
ಈ ಕಾಡಿಗೆ ಬಂದು ಇಬ್ಬರು ಫ್ರೆಂಡ್ಸ್ ಕಳೆದುಕೊಂಡೋ......ಇನ್ನೂ ಯಾರಿಗೆ ಬೇಕು ಈ ಕಾಡ ಸಹವಾಸ ...ಮೂರನೆಯವನು ನಾನಾಗುವುದಕ್ಕಿಂತ ಮೊದಲು ಈ ಕಾಡಿಂದ ಹೊರಟು ಹೋಗಬೇಕು ಅಂತ ಮನಸ್ಸಿನಲ್ಲೇ ಶಂಕರ ಯೋಚಿಸಿ ಅಲ್ಲಿಂದ ಚಂದ್ರನಿಗೆ ತಿಳಿಯದಂತೆ ಪರಾರಿಯಾಗುತ್ತಾನೆ...........ಊರು ತಲುಪಿದ್ದಾನೋ ಏನೋ ನಮಗಂತೂ ಗೊತ್ತಿಲ್ಲ......
ಇನ್ನ ಚಂದ್ರ ಒಬ್ಬನೇ ಈ ಕಾಡಲ್ಲಿ ,ಇವನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ...ಎಕಾಂಗಿ ಹೋರಾಟಕ್ಕೆ ಸಿದ್ದವಾಗೇ ಬಿಡ್ತಾನೆ .
ಮೊದಲು ಆ ಪ್ರಾಣಿಯ ಬಗ್ಗೆ ಎಲ್ಲಾ ವಿವರಗಳನ್ನು ಕಲೆ ಹಾಕುತ್ತಾನೆ..

ಏನದು ದೆವ್ವನ, ಯಾರಾದರೂ ಬೇಕು ಅಂತಾನೆ ಈಗೆಲ್ಲಾ ಮಾಡ್ತಾ ಇದ್ದಾರ ಏನದು...ತಿಳಿಯಬೇಕು ಅನಿಸ್ತಿದೆ ಅಲ್ವಾ...?
ಅದು ದೆವ್ವನು ಅಲ್ಲ ಭೂತನು ಅಲ್ಲ ,ಯಾರು ಮುಕವಾಡ ದರಿಸಿ ಈ ಕೆಲ್ಸ ಅಂತೂ ಮಾಡ್ತಾ ಇಲ್ಲ .. ……..
ಅದು ಒಂಥರ ವಿಚಿತ್ರ ಪ್ರಾಣಿ....ನೋಡಲು ಮನುಷ್ಯನಂತೆ ಇರುತ್ತೆ... ಚೂಪಾದ ಹಲ್ಲುಗಳು, ಮೈ ತುಂಬಾ ಕೂದಲು,ದೊಡ್ಡದಾಗಿ ಬೆಳೆದಿರುವ ಉಗುರುಗಳು
ದೊಡ್ಡ ದೇಹ....ನೋಡುಗರು ಒಮ್ಮೆ ಮೂಕರಾಗುವುದಂತೂ ಖಂಡಿತ. ಇದೊಂತರ ವಿಚಿತ್ರವಾದ ಕ್ರೂರ ಪ್ರಾಣಿ.......!!!
ಮಿಂಚಿನ ಓಟ, ಎತ್ತರವಾಗಿ ಜಿಗಿಯಬಲ್ಲ ವಿಶೇಷ ಸಾಮರ್ಥ್ಯ ಇದಕ್ಕಿದೆ......ಇದ್ಯಾಕೆ ಮನುಷ್ಯರನ್ನೆಲ್ಲ ಕೊಲ್ತಾ ಇರಬಹುದು....ಗೊಂದಲ ಬಿಡ್ರಪ್ಪ...ಮುಂದೆ ಓದಿ......ಪ್ರಾಣಿಗಳನ್ನು ಕೊಲ್ಲುವ ಮನುಷ್ಯರನ್ನು ಕಂಡರೆ ಇದಕ್ಕೆ ಆಗುವುದಿಲ್ಲ.ಇದೆ ಇದಕ್ಕೆಲ್ಲಾ ಮುಖ್ಯ ಕಾರಣ...ಮನುಷ್ಯರ ಕಂಡರೆ ಸಾಕು ಸಾಯಿಸದೇ ಬಿಡುವುದಿಲ್ಲ ಅದು.ಅವರು ಎಲ್ಲಿ ನನ್ನನ್ನ ಸಾಯಿಸ್ತಾರೋ ಅಂತ ಅದಕ್ಕಿಂತ ಮೊದಲು ಮನುಷ್ಯರನ್ನೇ ಸಾಯಿಸಿ ಬಿಡುವುದು ಇದರ ಕೆಲಸ……
ಅದಕ್ಕೆಇದನ್ನ ಸಾಯಿಸೋ ತೀರ್ಮಾನಕ್ಕೆ ಬರ್ತಾನೆ ನಮ್ ಹೀರೊ....ಒಂದು ಒಳ್ಳೆಯ ಸಮಯ ನೋಡಿ ಅದರ ಮೇಲೆ ದಾಳಿ ಮಾಡೇ ಬಿಡ್ತಾನೆ...ಹ ಹ ಎಂತ ಭಯಾನಕ ಯುದ್ದ ಇಬ್ಬರಿಗೂ ,ಅದನ ಸಾಯಿಸೊದ್ ಇರ್ಲಿ, ಅದರ ಹೊಡೆತದಿಂದ ಇವನು ತಪ್ಪಿಸಿ ಕೊಳ್ಳೋಕೆ ಸಾಹಸ ಮಾಡಬೇಕಾಗುತ್ತದೆ...ಕೊನೆಗೂ ಹೇಗೋ ಅದರಿಂದ ಇವನು ತಪ್ಪಿಸಿಕೊಂಡೆ ಬಿಡ್ತಾನೆ...
ಆಮೇಲೆ ಯೋಚಿಸುತ್ತಾನೆ ಇದನ್ನ ಗೆಲ್ಲಾಬೇಕಾದರೆ ಯುಕ್ತಿ ಬೇಕು ಶಕ್ತಿಯಲ್ಲ ಎಂದು.......ಹೊಸ ಹೊಸ ಪ್ಲಾನ್ ತಯಾರ್ ಮಾಡ್ತಾನೆ ...ಅದು ದಿನವೂ ಓಡಾಡುವ
ಜಾಗ ನೋಡಿ ಒಂದು ದೊಡ್ಡ ಗುಂಡಿ ತೋಡಿ..ಅದರ ಕೆಲಗಡೆ ಚೂಪಾದ ಕೋಲುಗಳನ್ನು ನೆಟ್ಟು ಮೇಲೆ ತರಗೆಲೆಗಳನ್ನು ಮುಚ್ಚಿ ಅದು ಬರುವುದನ್ನೇ ಕಾಯ್ತಾ ಇರ್ತಾನೆ.....ಅದು ಬಂತು ಬಂತು ಬಂತು ಎಷ್ಟು ವೇಗವಾಗಿ ಓಡಿ ಬಂತು ಅಂದ್ರೆ ಅಷ್ಟೇ ವೇಗವಾಗಿ ಆ ಗುಂಡಿಯೊಳಕ್ಕೆ ಬಿತ್ತು.......ಅಲ್ಲಿರುವ ಚೂಪಾದ ಕೋಲುಗಳು ಅದಕ್ಕೆ ಚುಚ್ಚಿಕೊಂಡವು ಅತಿಯಾದ ರಕ್ತಸ್ರಾವ, ಇನ್ನೇನು ಅದು ಸತ್ತೆ ಹೋಯ್ತು ಅಂತ ಇವನು ನಿಟ್ಟುಸಿರು ಬಿಡುವಷ್ಟರಲ್ಲಿ...ಅದು ಮೇಲೆದ್ದು
ಇವನ ಮೇಲೆ ಎಗರಿತು..ಈಗ ಇವನಿಗೆ ಅದನ್ನು ಎದುರಿಸುವುದು ಕಷ್ಟವೆನಿಸಲಿಲ್ಲ...ಮೊದಲೇ ಏಟು ತಿಂದ ಪ್ರಾಣಿ . ಬಿಡ್ತಾನ……. ಅದರ ಜೊತೆ ಒಂದಷ್ಟು ಸಮಯ ಹೋರಾಟ ನಡೆಯುತ್ತದೆ....ಕೊನೆಗೂ ಅದನ್ನ ಮತ್ತೆ ಅದೇ ಗುಂಡಿಗೆ ತಳ್ಳಿ....ಟಕ್ಕನೆ ಅದರ ಮೇಲೆ ಒಂದು ದೊಡ್ಡ ಕಲ್ಲು ಹಾಕಿ ಬಿಡ್ತಾನೆ....ಇನ್ನೂ ಅದು ಮೇಲೇಳುವ ಮಾತೆಲ್ಲಿ ಅದು ಸತ್ತೆ ಹೋಗಿರುತ್ತೆ.......ಇಲ್ಲಿಗೆ ಅದರ ಕಥೇನೂ ಮುಗಿಯುತ್ತೆ, ಇವನು ಬಂದ ಕೆಲಸನೂ ಆಗುತ್ತೆ...ತನ್ನ ಸ್ನೇಹಿತರನ್ನು ನೆನೆದು
ದುಃಖಿಸುತ್ತಾ ಆ ಕಾಡಿಂದ ಹಿಂದಿರುಗುತ್ತಾನೆ..ಅಂದು ಆ ಮಾಯಾಪುರದಲ್ಲಿ ಹಬ್ಬವೋ ಹಬ್ಬ ..ಎಲ್ಲರಿಗೂ ಸಂತಸವೋ ಸಂತಸ...ಈಗ ನೆಮ್ಮದಿಯಿಂದ ಕಾಡು ಸುತ್ತುತ್ತಾರೆ...ರಾವಣನನ್ನು ಕೊಂದ ರಾಮನನ್ನು ಗೌರವಿಸುವಂತೆ ..ಅಲ್ಲಿನ ಜನರು ಇವನನ್ನು ಗೌರವಿಸುತ್ತಾರೆ....

ಇನ್ನೇನಿದೆ ಇಲ್ಲಿ...... ಇವನು ತನ್ನ ಪ್ರಿಯತಮೆಯ ಜೊತೆ ತನ್ನೂರಿಗೆ ಹೊರಡುತ್ತಾನೆ....ಶಂಕರ ಅಲ್ಲೇ ಇರ್ತಾನಪ್ಪ....ಸುಮ್ನೇ ಇರಲ್ಲ ಇವರು ಬರ್ತಾ ಇದ್ದಂಗೆ
ಸ್ವಾಗತ ಬೇರೆ ಕೊರ್ತಾನೆ...
ಎನ್ಗೆ ಗೊತ್ತಾ ನಮ್ ಹೀರೊ ಜೊತೆ ಸೇರಿ ಹಾಡು ಬೇರೆ ಹಾಡ್ತಾನೆ
ಕೇಳ್ತೀರಾ ವಿಜಯೋತ್ಸವದ ಹಾಡು

ಎಲ್ಲಾನೂ ಸಾದಿಸಬಹುದು
ಎಲ್ಲಾನೂ ಗೆಲ್ಲಬಹುದು
ನಮ್ಮನ್ನು ನಾವು ನಂಬಬೇಕು ಮೊದಲು

ಯಾರನ್ನೂ ಎದುರಿಸಬಹುದು
ಎಲ್ಲಾನೂ ಪಡೆಯಬಹುದು
ಎಲ್ಲಾದಕ್ಕೂ ಬೆಂಬಲ ಬೇಕು ಮೊದಲು
ನಮ್ಮನು ನಾವು ನಂಬ ಬೇಕು ಮೊದಲು

ಇಲ್ಯಾರೂ ದಡ್ಡರು ಅಲ್ಲ
ಇಲ್ಯಾರೂ ನಿಸ್ಪ್ರಯೋಜಕರು ಅಲ್ಲ
ಎಲ್ಲದಕ್ಕೂ ಒಂದು ಸಮಯ ಬರಬೇಕು ಮೊದಲು
ನಮ್ಮನ್ನ ನಾವು ನಂಬಬೇಕು ಮೊದಲು

ಪ್ರೀತಿನೆ ಎಲ್ಲಾ ಇಲ್ಲಿ
ದ್ವೇಷಿಸಿ ಗೆದ್ದೋರ್ ಯಾರು ಇಲ್ಲ ಇಲ್ಲಿ
ಎಲ್ಲದಕ್ಕೂ ತಾಳ್ಮೆ ಬೇಕು ಮೊದಲು
ನಮ್ಮ ನಾವು ನಂಬಬೇಕು ಮೊದಲು.

ಸೋಮೇಶ್ ಗೌಡ

ನೋಡಿ ಅವನಲ್ಲಿರುವ ಕುತೂಹಲ ಒಂದು ಊರನ್ನೇ ರಕ್ಷಿವಂತಾಯ್ತು.......ಏನು ಮಾಡುವುದು ವಿಪರ್ಯಾಸ ಇದರಲ್ಲಿ ಅವನ ಸ್ನೇಹಿತರನ್ನು ಕಳೆದುಕೊಂಡ...
ಕೊನೆಗೂ ಗೆದ್ದ....ಒಂದನ್ನು ಪಡೆಯಬೇಕಾದರೆ ಇನ್ನೊದನ್ನು ಕಳೆದುಕೊಳ್ಳಬೇಕು ಅಂತ ದೊಡ್ಡವರೇ ಹೇಳಿದ್ದಾರೆ...ಇರ್ಲಿ ಬಿಡಿ............
ಯಾವುದೇ ಕೆಲಸ ಮಾಡಬೇಕಾದರೂ ನಾವು ಅದರ ಬಗ್ಗೆ ಸೋಮಾರಿತನ ತೋರಿಸುವುದನ್ನ ಬಿಟ್ಟು...ಅದನ್ನು ಮಾಡೇ ಮಾಡುತ್ತೇನೆ ಎಂಬ ನಂಬಿಕೆ ಇಡಬೇಕು ..ಆಗ ಅದು ಪೂರ್ಣಗೊಳ್ಳುವುದು ಖಂಡಿತ....




ಧನ್ಯವಾದ

ಸೋಮೇಶ್ ಗೌಡ
Somesh N Gowda

ಸೂಚನೆ: ನನಗೆ ಇನ್ನೂ ಇದನ್ನು ಒಳ್ಳೆಯೇ ಕಥೆಯ ರೂಪದಲ್ಲಿ ಪರಿಪೂರ್ಣವಾಗಿ ವಿವರಿಸುವಂತ ಸಾಮರ್ಥ್ಯ ಇಲ್ಲ..ಆದರೂ ಒಂದು ಪ್ರಯತ್ನ ಮಾಡಿದ್ದೇನೆ
ಬರವಣಿಗೆಯಲ್ಲಿ ಏನಾದರೂ ತಪ್ಪುಗಳು ಕಂಡು ಬಂದಲ್ಲಿ..ದಯವಿಟ್ಟು  ತಿಳಿಸಿ

Thanksss

1 comment:

  1. olle praythna.. mundhuvarisi..

    - Ravikumara YM

    ReplyDelete